‘ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ, ಇದರಲ್ಲಿ ಔಷಧೀಯ ಗುಣ ಇದೆ ಎಂಬುದನ್ನು ಸರ್ಕಾರ ಒಪ್ಪಿಕೊಳ್ಳುವ ನಿಟ್ಟಿನಲ್ಲಿ ಮನವರಿಕೆ ಮಾಡಿಕೊಡಲಾಗುವುದು. ಅಡಿಕೆ ಬೆಳೆಗಾರರಲ್ಲಿ ಅನವಶ್ಯಕವಾಗಿ ಆತಂಕ ಮೂಡಿಸುವ ನಿಟ್ಟಿನಲ್ಲಿ ಕೆಲವರು ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಅಡಿಕೆಯ ಸಾಂಪ್ರದಾಯಿಕ ಮಹತ್ವ ಗೊತ್ತಿಲ್ಲದ ಉತ್ತರ ಭಾರತದ ಕೆಲವರು ನೀಡಿದ ಹೇಳಿಕೆಯಿಂದಾಗಿ ತಪ್ಪು ಮಾಹಿತಿ ರವಾನೆಯಾಗಿದೆ' ಎಂದು ಅವರು ವಿವರಿಸಿದರು.