ಇದೀಗ ಭ್ರಷ್ಟಾಚಾರ ತಡೆ ಘಟಕದ (ಎಸಿಯು) ನೂತನ ಮುಖ್ಯಸ್ಥ ಅಜಿತ್ ಸಿಂಗ್ ಅವರ ನೇಮಕಕ್ಕೆ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಅವರ ಅಭಿಪ್ರಾಯವನ್ನೂ ಕೇಳದೇ ಸಿಒಎ ಒಪ್ಪಿಗೆ ಸೂಚಿಸಿದೆ. ಅಜಿತ್ ಸಿಂಗ್ ಅವರ ನೇಮಕಪತ್ರಕ್ಕೆ ಸಹಿ ಹಾಕಲು ಚೌಧರಿ ಅವರು ಒಪ್ಪಿರಲಿಲ್ಲ. ಎಸಿಯು ಮುಖ್ಯಸ್ಥರಾಗಿದ್ದ ನೀರಜ್ ಕುಮಾರ್ ಅವರ ಅವಧಿಯು ಶನಿವಾರ ಮುಕ್ತಾಯವಾಯಿತು. ಆದರೆ ಐಪಿಎಲ್ ಟೂರ್ನಿಯು ಮುಗಿಯುವವರೆಗೂ ಅವರು ಅಜಿತ್ ಸಿಂಗ್ ಜೊತೆಗೆ ಕಾರ್ಯನಿರ್ವಹಿಸಲಿದ್ದಾರೆ.