ಏ.4ರಂದು ಆ ಭಾಗದ ಬ್ಲಾಕ್ ಅಧ್ಯಕ್ಷರು, ಜಿಲ್ಲಾಧ್ಯಕ್ಷರ ಸಭೆ ನಡೆಸುವರು. ಬಳಿಕ ಹೊಳಲ್ಕೆರೆಗೆ ತೆರಳಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು. ನಂತರ ತುಮಕೂರಿನಲ್ಲಿ ರೋಡ್ ಶೋ ನಡೆಸಲಿದ್ದು, ಸಿದ್ಧಗಂಗಾ ಶ್ರೀಗಳನ್ನು ಭೇಟಿ ಮಾಡುವ ಚಿಂತನೆ ಇದೆ. ಈ ಬಗ್ಗೆ ಮಠದೊಂದಿಗೆ ಮಾತನಾಡಿ, ಸಮಯ ನಿಗದಿ ಮಾಡಲಾಗುವುದು. ಅದೇ ದಿನ ಕುಣಿಗಲ್ನಲ್ಲಿ ರೋಡ್ ಶೋ ನಡೆಸಿ, ಮಾಗಡಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿರುವ ರಾಹುಲ್ ದೆಹಲಿಗೆ ತೆರಳಲಿದ್ದಾರೆ. ಏ.7ರಂದು ಮತ್ತೆ ಬರುವ ಅವರು, ಮುಳಬಾಗಿಲು, ಕೆಜಿಎಫ್, ಬಂಗಾರಪೇಟೆಯಲ್ಲಿ ರೋಡ್ ಶೋ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.