ಸದ್ಗುರು ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸುಣಗಾರ ಅವರನ್ನು ಖಾಸಬಾಗದ ತಾಳೂಕರ ಚಿತ್ರಕಲಾ ಮತ್ತು ಸಮಾಜ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣರಾಜೇಂದ್ರ ತಾಳೂಕರ ಸನ್ಮಾನಿಸಿದರು. ಕವಿಗೋಷ್ಠಿಯಲ್ಲಿ ಬಿ.ಕೆ. ಹೊಂಗಲ, ಸಿದ್ದೇಶ್ವರ ಹಿರೇಮಠ, ಹೇಮಾ ಸೊನೊಳ್ಳಿ, ಸುನಂದಾ ಹಾಲಬಾವಿ, ಎ. ಎ. ದರ್ಗಾ, ಸುನಂದಾ ಎಣ್ಣಿ, ಎಲ್.ಎಚ್. ಮಿಕ್ಕಲಿ, ರಾಜು ರಾಮದುರ್ಗ, ಸಿಕಂದರ ಮಹಾತ, ಜಗದೀಶ ಧಾರವಾಡಕರ, ಎಂ.ಎನ್. ಗೊವನ್ನವರ, ರವಿ ಶಾಸ್ತ್ರಿ, ಡಿ.ಎಸ್. ಡಿಗ್ಗಿಮಠ, ಚಂದ್ರಶೇಖರ ಕೊಪ್ಪದ, ಗಂಗಾಧರ ಗಾಡದ, ಬಸವನಗೌಡ ಪಾಟೀಲ, ಸುನೀತಾ ಪಾಟೀಲ, ಕಾಡೇಶ ಬಸ್ತವಾಡಿ, ರೇಖಾ ಅಂಗಡಿ, ಫ್ರಕುಸಾಬ ಬಾವನ್ನವರ, ಶಿವಾ ಬಿದರಕಟ್ಟಿ, ಅಜಮವ್ವ ಭೋವಿ, ಸಂತೋಷ ನಾಯಕ ಹಾಗೂ ಆನಂದ ಹಿರೇಮಠ ಕಾವ್ಯ ವಾಚಿಸಿದರು. ಬಸವರಾಜ ಸುಣಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೋಮಶೇಖರ ಸೊಗಲದ ನಿರೂಪಿಸಿದರು. ರಾಜು ರಾಮದುರ್ಗ ಸ್ವಾಗತಿಸಿದರು. ನೀರಾ ಗೋಣಿ ವಂದಿಸಿದರು.