ಪಟ್ಟಣದ ಹೊರವಲಯದ ನಿರ್ಜನ ಪ್ರದೇಶದಲ್ಲಿರುವ ಬ್ಯಾಂಕ್ ಶಾಖೆಗೆ ಹೆಚ್ಚಿನ ಭದ್ರತೆ ಇಲ್ಲದಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಭಾನುವಾರ ರಾತ್ರಿ ಗುಡುಗು ಸಹಿತ ಮಳೆ ಬರುತ್ತಿದ್ದ ವೇಳೆ ಜನ ಸಂಚಾರ ವಿರಳವಾಗಿದ್ದನ್ನು ಗಮನಿಸಿ ಕಟ್ಟಡದ ಹಿಂಭಾಗದ ಗೋಡೆಯಲ್ಲಿ ಕಿಂಡಿ ಕೊರೆದು ಒಳಗೆ ಪ್ರವೇಶಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.