ಒಂದು ವೇಳೆ, ಸನ್ಮಾನ ಮಾಡಲೇಬೇಕೆಂದು ಬೆಂಬಲಿಗರು ಪಟ್ಟು ಹಿಡಿದರೆ ಅದಕ್ಕೆ ಪರ್ಯಾಯ ಉಂಟು. ಇತ್ತೀಚಿನ ದಿನಗಳಲ್ಲಿ ಟೊಮೆಟೊ, ಕ್ಯಾರೆಟ್, ಈರುಳ್ಳಿಯಂಥ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಇಂಥ ಅಗ್ಗದ ತರಕಾರಿ ಹಾರವಾದರೂ ಹಾಕಿಸಿಕೊಂಡರೆ ಒಳ್ಳೆಯದು. ಅದರಿಂದ ರೈತರಿಗೆ ಕಿಂಚಿತ್ತು ಪ್ರಯೋಜನವಾದರೂ ಆದೀತು.