ಏ.1ರಂದು ಅಫಜಲಪುರದ ತಮ್ಮ ತೋಟದ ಮನೆಯಲ್ಲಿ ಆಯೋಜಿಸಿದ್ದ ಬೆಂಬಲಿಗರು ಮತ್ತು ಹಿತೈಷಿಗಳ ಸಭೆಯಲ್ಲಿ ಮಾತನಾಡಿದ್ದ ಅರುಣಕುಮಾರ್, 'ಮದ್ಯ ಮಾರುವ ಮನುಷ್ಯ (ಮಾಲೀಕಯ್ಯ) ಅನೇಕ ಕೊಲೆಗಳನ್ನು ಮಾಡಿಸಿದ್ದಾರೆ. ಸರಣಿ ಕೊಲೆಗಳನ್ನು ಮಾಡಿಸಿದ್ದಾರೆ. ಇವತ್ತು ಶಾಸಕರಾಗಿ ವಿಧಾನಸೌಧದಲ್ಲಿ ಕುಳಿತಿದ್ದಾರೆ. ಸರಣಿ ಕೊಲೆಗಳಲ್ಲಿ ಇವರು ಜೈಲಿಗೆ ಹೋಗುತ್ತಿದ್ದರು. ಶಾಸಕ ಎಂಬ ಕಾರಣಕ್ಕೆ ಜೆ.ಎಚ್.ಪಟೇಲ್ ಇವರನ್ನು ಉಳಿಸಿಕೊಂಡಿದ್ದರು. ಸರಣಿ ಕೊಲೆಗಾರ ನಮ್ಮ ಶಾಸಕನಾಗಿ ಇವತ್ತು ಕೋಣದ ರೀತಿಯಲ್ಲಿ ನಮ್ಮ ತಾಲ್ಲೂಕಿನಲ್ಲಿ, ಜಿಲ್ಲೆಯಲ್ಲಿ, ಕರ್ನಾಟಕದಲ್ಲಿ ತಿರುಗಾಡುತ್ತಿದೆ. ಈ ಕೋಣವನ್ನು ನಾವು ಕಡಿಯಲೇಬೇಕು. ಈ ಕೋಣವನ್ನು ಯಾವ ರೀತಿ ಕಡಿಯಬೇಕು ಅಂದರೆ ತಮ್ಮ ಅಮೂಲ್ಯವಾದ ಮತಗಳಿಂದ ಕಡಿಯಬೇಕು.. ಈಡಿಗರ ಕೋಣ ಮುಂದೆ ಬರಲೇಬಾರದು..' ಎಂದು ಹೇಳಿದ್ದಾರೆ.