ಚನ್ನಪಟ್ಟಣ: ನಗರದಲ್ಲಿ ಜೆಡಿಎಸ್ ಹಮ್ಮಿಕೊಂಡಿದ ವಿಕಾಸಪರ್ವ ಸಮಾವೇಶದ ಅಂಗವಾಗಿ ಸಾವಿರಾರು ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದರು. ಮೈಸೂರು– ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನ ಸವಾರರ ಪರದಾಡಿದರು.
ವಂದಾರಗುಪ್ಪೆಯಿಂದ ಬೈರಾಪಟ್ಟಣದವರೆಗೆ ಸುಮಾರು ಏಳು ಕಿಲೋಮೀಟರ್ ದೂರ ವಾಹನಗಳು ಸತತ ಮೂರು ಗಂಟೆ ಕಾಲ ಸಾಲುಗಟ್ಟಿ ನಿಂತಿದವು.