ಕೇಜ್ರಿವಾಲ್, ಎಎಪಿ ಮುಖಂಡರಾದ ರಾಘವ್ ಚಂದ್ರಾ, ಸಂಜಯ್ ಸಿಂಗ್, ಅಶುತೋಷ್ ಮತ್ತು ದೀಪಕ್ ಬಾಜ್ಪೈ ಅವರು ಜೇಟ್ಲಿ ಅವರ ಕ್ಷಮೆ ಕೋರಿದ್ದರು. ಈ ಸಂಬಂಧ ತಾವು ರಾಜಿ ಒಪ್ಪಂದಕ್ಕೆ ಬಂದಿರುವುದಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ರಾಜೀವ್ ಸಹಾಯ್ ಅವರು ಪ್ರಕರಣ ಮುಕ್ತಾಯಗೊಳಿಸಿದರು. ಆದರೆ ಕುಮಾರ್ ವಿಶ್ವಾಸ್ ಅವರು ಕ್ಷಮೆ ಕೋರದ ಕಾರಣ, ಅವರ ವಿರುದ್ಧದ ಪ್ರಕರಣ ಮುಂದುವರಿಯಲಿದೆ ಎಂದರು.