ಈ ಕುರಿತು ಗೋರಖಪುರದ ಜಿಲ್ಲಾಧಿಕಾರಿ ಕೆ. ವಿಜಯೇಂದ್ರ ಪಾಂಡಿಯನ್ ಸ್ಪಷ್ಟನೆ ನೀಡಿದ್ದಾರೆ. ‘ಆಯುಷ್ ಸಿಂಘಲ್ ಸೂಕ್ತ ದಾಖಲೆಗಳಿಲ್ಲದೆ ಬಂದಿದ್ದರು. ಹೀಗಾಗಿ ಅರ್ಜಿ ತುಂಬಿಕೊಂಡು ಬರುವಂತೆ ಅವರಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ದಾಖಲೆಗಳಿಲ್ಲದ ಕೆಲವು ದೂರುಗಳು ಬಂದಾಗ ಅರ್ಜಿ ತುಂಬಿಕೊಡುವಂತೆ ಹೇಳಲಾಗುತ್ತದೆ. ಆಯುಷ್ ಬರಿಗೈನಲ್ಲಿ ಬಂದಿದ್ದರು. ಅವರು ಪ್ರಸ್ತಾಪಿಸಿರುವ ದೂರು ಭೂಮಿ ವಿಭಜನೆಗೆ ಸಂಬಂಧಿಸಿದ್ದಾಗಿತ್ತು’ ಎಂದು ಅವರು ಹೇಳಿದ್ದಾರೆ.