‘ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲು ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ನಿರ್ಧರಿಸಿತ್ತು. ಅಂಬೇಡ್ಕರ್ ಅವರು ತಮ್ಮ ಕೊನೆಯ ದಿನಗಳನ್ನು ಕಳೆದಿದ್ದ ‘ಅಲಿಪುರ್ ರೋಡ್ ಹೌಸ್’ ಅನ್ನು ಸ್ಮಾರಕವಾಗಿ ಬದಲಿಸಲು ನಿರ್ಧರಿಸಿತ್ತು. ಆದರೆ ನಂತರ ಬಂದ ಸರ್ಕಾರಗಳು ಸ್ಮಾರಕದ ಕಾಮಗಾರಿಯನ್ನು ಕಡೆಗಣಿಸಿದವು. ಆದರೆ ನಾವು ಸ್ಮಾರಕವನ್ನು ಪೂರ್ಣಗೊಳಿಸಿದ್ದೇವೆ. ಆ ಸ್ಮಾರಕ ಅಂದರೆ, ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರವನ್ನು ಇದೇ 13ರಂದು ದೇಶಕ್ಕೆ ಸಮರ್ಪಿಸಲಿದ್ದೇವೆ’ ಎಂದು ಅವರು ಘೋಷಿಸಿದರು.