ಬೆಂಗಳೂರು: ಭಾರಜಲ ಪೂರೈಕೆ ಉದ್ದೇಶಕ್ಕೆ ಭಾರ ಜಲ ಮಂಡಳಿ, ಅಣು ಇಂಧನ ಇಲಾಖೆ ಮತ್ತು ಕೇಂದ್ರ ಸರ್ಕಾರ ಬೆಂಗಳೂರಿನ ನವೋದ್ಯಮ ಎಸ್ವೈಎನ್ಎಂಆರ್ ಕೆಮಿಕಲ್ಸ್ ಜತೆ 10 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿವೆ.
ಎಸ್ವೈಎನ್ಎಂಆರ್ ಕೆಮಿಕಲ್ಸ್, ಸ್ಟಾರ್ಟ್ಅಪ್ ಕಂಪನಿಯಾಗಿದ್ದು, ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ.
ಕೇಂದ್ರ ಸರ್ಕಾರದ ‘ಭಾರತದಲ್ಲಿಯೇ ತಯಾರಿಸಿ’ ಕಾರ್ಯಕ್ರಮದ ಭಾಗವಾಗುತ್ತಿರುವುದು ನಮಗೆ ಸಂತಸ ತಂದಿದೆ. ಇದರಿಂದ ವಿದೇಶಗಳ ಮೇಲಿನ ಅವಲಂಬನೆ ತಪ್ಪಲಿದ್ದು, ವಿದೇಶಿ ವಿನಿಮಯದಲ್ಲೂ ಉಳಿತಾಯ ಆಗಲಿದೆ ಎಂದು ಸಂಸ್ಥೆಯ ಸಿಇಒ ಡಾ.ಶಂಕರ್ ಅಯ್ಯರ್ ತಿಳಿಸಿದ್ದಾರೆ.