‘ಬಸವಣ್ಣನವರ ಮೂರ್ತಿಯ ಎದುರು ಎರಡೂ ಕೈಜೋಡಿಸಿ ನಿಲ್ಲುವ ಮೋದಿ, ‘ನುಡಿದಂತೆ ನಡೆ’ ಎಂಬ ಅವರ ತತ್ವವನ್ನು ಮಾತ್ರ ಪಾಲಿಸಲೇ ಇಲ್ಲ. ಅವರು ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ ಹಣ ಹಾಕಲಿ. ರೈತರಿಗೆ ಹೇಳಿದಂತೆ ಕನಿಷ್ಠ ಬೆಂಬಲ ಬೆಲೆ ಕೊಡಲಿ. ವರ್ಷಕ್ಕೆ 2 ಕೋಟಿ ಯುವಕರಿಗೆ ಉದ್ಯೋಗ ಕೊಡಲಿ. ಆಗ ‘ನುಡಿದಂತೆ ನಡೆ’ ತತ್ವವನ್ನು ಸಾಕಾರಗೊಳಿಸಿದಂತಾಗುತ್ತದೆ. ಆದರೆ, ನಾಲ್ಕು ವರ್ಷಗಳಿಂದ ಮೋದಿ ಮಾಡುತ್ತಾ ಬಂದಿರುವುದು ಸುಳ್ಳು ಭಾಷಣ. ಅದರಲ್ಲಿ ಎಷ್ಟು ನಿಜವಾಗಿದೆ ಎನ್ನುವುದನ್ನು ಯಾರಾದರೂ ವಿಶ್ಲೇಷಿಸಬಹುದು’’ ಎಂದು ಲೇವಡಿ ಮಾಡಿದರು.ನೀರಾವರಿ ಸಮಸ್ಯೆ ಎದುರಿಸಿ, ತುಸು ಚೇತರಿಸಿಕೊಂಡಿರುವ ಕ್ಷೇತ್ರ ಹೊಳಲ್ಕೆರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನೀರಾವರಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮೂರು ಪಟ್ಟು ಹೆಚ್ಚು ಹಣವನ್ನು ವಿನಿಯೋಗಿಸಿದೆ ಎಂದು ರಾಹುಲ್ ಹೇಳಿದ್ದು, ಇಲ್ಲಿನ ಜನರ ನಾಡಿಮಿಡಿತ ಅರಿತು ಮಾತನಾಡಿದಂತೆ ಇತ್ತು.