ಅಲ್ಲದೆ, ಇಲ್ಲಿಂದ ಒಂದರಿಂದ 10ನೇ ವಾರ್ಡ್ಗೆ ಪೂರೈಕೆ ಆಗುತ್ತಿರುವ ನೀರಿನಿಂದಾಗಿ ಚರ್ಮ ರೋಗ ಈಗಾಗಲೇ ಕಾಣಿಸಿಕೊಂಡಿದೆ. ಕಲುಷಿತ ನೀರನ್ನು ಪರ್ಯಾಯವಾಗಿ ಅರ್ಕಾವತಿಗೆ ಮಿಶ್ರಣ ಆಗದಂತೆ, ಗುಂಡಿ ತೊಡಿ ಶೇಖರಣೆ ಮಾಡುವ ಜನರ ಕಣ್ಣೊರೆಸುವ ತಾತ್ಕಾಲಿಕ ಕ್ರಮ ಕೈಬಿಟ್ಟು ಹಳ್ಳಿಮಾಳ ರಸ್ತೆಯ ಅರ್ಕಾವತಿ ಸೇತುವೆ ಬಳಿ ಪಂಪ್ ಹೌಸ್ ನಿರ್ಮಾಣ ಮಾಡಬೇಕು. ಶಾಶ್ವತ ಪರಿಹಾರ ವ್ಯವಸ್ಥೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಈಗ ಪೂರೈಸುತ್ತಿರುವ ನೀರು ಸಹ ವ್ಯವಸ್ಥಿತವಾಗಿ ಶುದ್ಧೀಕರಿಸಲಾಗುತ್ತಿಲ್ಲ. ಪ್ರತಿನಿತ್ಯ ಬೆಳಿಗ್ಗೆ ಸಂಜೆ 50ಕೆ.ಜಿ. ಬ್ಲಿಚಿಂಗ್ ಪೌಡರ್ ಹಾಕುತ್ತಿರುವುದರಿಂದ ನೀರಿನ ಶುದ್ಧೀಕರಣ ಸಹ ಸಮರ್ಪಕವಾಗಿಲ್ಲ ಎಂದು ಒಂದನೇ ವಾರ್ಡಿನ ಮುಖಂಡರಾದ ದೊಡ್ಡಿಉಮೇಶ್, ರಾಜಣ್ಣ, ದೊಡ್ಡಯ್ಯ, ಉಮೇಶ್ ತಿಳಿಸಿದರು.