ಕೌಶಲಯುತ ಯುವ ಸಮಾಜ ಕಾರ್ಯಕರ್ತರನ್ನು ತರಬೇತುಗೂಳಿಸುವ ನಿಟ್ಟಿನಲ್ಲಿ ಸಮಾಜಕಾರ್ಯ ವಿಭಾಗದ ಅಧ್ಯಾಪಕರ ಶ್ರಮ ಶ್ಲಾಘನೀಯ ಎಂದು ಮೆಚ್ಚುಗೆ ಸೂಚಿಸಿದರು.ಕುಲಪತಿ ಅವರನ್ನು ಸನ್ಮಾನಿಸಿ ಮಾತನಾಡಿದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ.ಬಿ.ರಮೇಶ್, ‘ವೈ.ಎಸ್. ಸಿದ್ದೇಗೌಡ ಅವರು ಸಮಾಜ ಕಾರ್ಯ ವಿಭಾಗದಿಂದ ಮೊದಲ ಕುಲಪತಿಯಾಗಿ ನೇಮಕಗೊಳ್ಳುವ ಮೂಲಕ ದಾಖಲೆ ಬರೆದಿದ್ದಾರೆ. ಪ್ರೊ. ವೈ.ಎಸ್.ಎಸ್ ಶಿಸ್ತು, ವೇಗ, ಗುಣಮಟ್ಟ ಮತ್ತು ಪಾರದರ್ಶಿಕ ಆಡಳಿತಕ್ಕೆ ಹೆಸರಾದವರು. ಅವರ ನಾಯಕತ್ವದಲ್ಲಿ ತುಮಕೂರು ವಿ.ವಿ ದೇಶದ ಉನ್ನತ ಶಿಕ್ಷಣದ ಭೂಪಟದಲ್ಲಿ ಮಹತ್ತರ ಸ್ಥಾನ ವನ್ನು ಪಡೆಯಲಿದೆ’ ಎಂದು ಹೇಳಿದರು.ವಿಶ್ವವಿದ್ಯಾನಿಲಯದ ಎಲ್ಲ ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿಗಳು ಕುಲಪತಿ ಅವರೊಡನೆ ಕೈಜೋಡಿಸಿ ಶ್ರಮಿಸುವ ಸಂಕಲ್ಪ ಮಾಡಬೇಕಿದೆ ಎಂದು ತಿಳಿಸಿದರು.