ಮೂರು ದಿನಗಳ ಹಿಂದೆ ಗ್ರಾಮದ ದಲಿತರ ಕಾಲೊನಿಯಲ್ಲಿರುವ ಹ್ಯಾಂಡ್ಪಂಪ್ ಕೆಟ್ಟಿತ್ತು. ಆಗ ದಲಿತರು ಸವರ್ಣೀಯರ ಕಾಲೊನಿಯಲ್ಲಿನ ಹ್ಯಾಂಡ್ಪಂಪ್ನಲ್ಲಿ ಕುಡಿಯಲು ನೀರು ತರಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಹ್ಯಾಂಡ್ಪಂಪ್ ಮುಟ್ಟದಂತೆ ಎಚ್ಚರಿಕೆ ನೀಡಿದ್ದಾರೆ. ಕುಡಿಯಲು ನೀರು ಒದಗಿಸುವಂತೆ ಮನವಿ ಮಾಡಿಕೊಂಡ ಮೇಲೆ ತಾವೇ ಹ್ಯಾಂಡ್ಪಂಪ್ನಿಂದ ನೀರು ಹಿಡಿದು ದಲಿತ ಕೊಡಗಳಿಗೆ ಸುರಿದಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.