ನಗರದ ಕುಮಾರಸ್ವಾಮಿ ಲೇಔಟ್ನಲ್ಲಿರುವ ದಯಾನಂದ ಸಾಗರ ಕಾಲೇಜು ಆವರಣದಲ್ಲಿ ಎರಡು ದಿನ ನಡೆಯುವ ಸಾಂಸ್ಕೃತಿಕ ಹಬ್ಬಕ್ಕೆ ಗುರುವಾರ ಚಾಲನೆ ದೊರೆಯಿತು. ನಟರಾದ ಸುಚೇಂದ್ರ ಪ್ರಸಾದ್, ರಿಷಿ ಹಾಗೂ ನಟಿ ಶೀತಲ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆ ಕಾರ್ಯಕ್ರಮದಲ್ಲಿ ಮುದ್ರಾ ಹಾಗೂ ನಾಟ್ಯ ಅಭಿನಯಿ ಸಾಗರಿ ತಂಡಗಳ ನೃತ್ಯ ಪ್ರದರ್ಶನ ಕಣ್ಮನಸೆಳೆಯಿತು.