ಐದು ನಿಲ್ದಾಣಗಳು ಸಿದ್ಧ: ಖಜ್ಜಿಡೋಣಿವರೆಗಿನ ಮಾರ್ಗದಲ್ಲಿ ನವನಗರ, ಸೂಳಿಕೇರಿ, ಕೆರಕಲಮಟ್ಟಿ, ಶೆಲ್ಲಿಕೇರಿ ಹಾಗೂ ಖಜ್ಜಿಡೋಣಿ ರೈಲು ನಿಲ್ದಾಣಗಳು ಸಿದ್ಧಗೊಂಡಿವೆ.ಪರಿಹಾರ ಕಾಣದ ಭೂಸ್ವಾಧೀನ ಸಮಸ್ಯೆ: ಬಾಗಲಕೋಟೆ–ಕುಡಚಿ ನಡುವೆ ರೈಲ್ವೆ ಇಲಾಖೆ ₹800 ಕೋಟಿ ವೆಚ್ಚದಲ್ಲಿ 180 ಕಿ.ಮೀ ಹೊಸ ಮಾರ್ಗ ನಿರ್ಮಾಣ ಮಾಡುತ್ತಿದೆ. ಜಮಖಂಡಿ ಉಪವಿಭಾಗದಲ್ಲಿ ಕೆಲವು ಕಡೆ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳದ ಕಾರಣ ಹಳಿ ನಿರ್ಮಾಣ ಕಾರ್ಯ ವಿಳಂಬವಾಗಿದೆ. ಹಾಗಾಗಿ ಈಗ ಸಿದ್ಧವಿರುವ ಕಡೆಯೇ ಸಾರ್ವಜನಿಕರಿಗೆ ಸೇವೆ ಕಲ್ಪಿಸಲು ರೇಲ್ಬಸ್ ಪರಿಚಯಿಸಲಾಗುತ್ತಿದೆ ಎಂದು ತಿಳಿದುಬಂದಿದೆ.