ತೆಂಜಿನ್ (ಪಿಟಿಐ): ಭರವಸೆಯ ಆಟಗಾರರು ಕೈಚೆಲ್ಲಿದ ಕಾರಣ ಭಾರತ ತಂಡ ಡೇವಿಸ್ ಕಪ್ ವಲಯಮಟ್ಟದ ಪಂದ್ಯದ ಮೊದಲ ದಿನ ನಿರಾಸೆ ಅನುಭವಿಸಿತು. ಇಲ್ಲಿ ಶುಕ್ರವಾರ ನಡೆದ ಚೀನಾ ಎದುರಿನ ಪಂದ್ಯದಲ್ಲಿ ರಾಮಕುಮಾರ್ ರಾಮನಾಥನ್ ಮತ್ತು ಸುಮಿತ್ ನಗಾಲ್ ಸೋಲು ಕಂಡರು. ವಲಯ ಮಟ್ಟದ ಪಂದ್ಯದಲ್ಲಿ ಐದು ವರ್ಷಗಳಲ್ಲಿ ಭಾರತ ಅನುಭವಿಸಿದ ಮೊದಲ ಸೋಲು ಇದು.