ಶ್ರೀನಗರ: ಕಾಶ್ಮೀರದ ಬಂಡಿಪೊರಾ ಜಿಲ್ಲೆಯಿಂದ ಭಾರತೀಯನೊಬ್ಬನನ್ನು ಈಚೆಗೆ ಅಪಹರಿಸಿದ್ದ ಲಷ್ಕರ್–ಎ–ತಯಬಾ (ಎಲ್ಇಟಿ) ಉಗ್ರರು, ಆತನ ಶಿರಚ್ಛೇದ ಮಾಡಿರುವ ಬಗ್ಗೆ ಶುಕ್ರವಾರ ವರದಿಯಾಗಿದೆ.
‘ಮಂಜೂರ್ ಅಹ್ಮದ್ ಭಟ್ ಎಂಬುವರನ್ನು ಇದೇ 4ರರಾತ್ರಿ ಉಗ್ರರು ಅಪಹರಿಸಿದ್ದರು. ಅವರ ರುಂಡ ಬೇರ್ಪಡಿಸಿ ಹತ್ಯೆ ಮಾಡಲಾಗಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.