ಬೆಂಗಳೂರು: ಆಸ್ತಮಾದಿಂದಾಗಿ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ನಟಿ ಜಯಂತಿ ಅವರು ಗುಣಮುಖರಾಗಿದ್ದಾರೆ.
ಜಯಂತಿ ಅವರ ಮಗ ಕೃಷ್ಣಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‘ಅಮ್ಮನಿಗೆ ವೈದ್ಯರು ಕಟ್ಟುನಿಟ್ಟಾದ ಡಯಟ್ ಅನುಸರಿಸಲು ಹೇಳಿದ್ದಾರೆ. 10 ದಿನಗಳ ನಂತರ ಮತ್ತೆ ಪರೀಕ್ಷೆಗಳನ್ನು ಮಾಡಲಾಗುತ್ತದೆ’ ಎಂದು ಹೇಳಿದರು.
‘ನನಗೋಸ್ಕರ ಪ್ರಾರ್ಥನೆ ಮಾಡಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ’ ಎಂದು ಜಯಂತಿ ಅವರು ಭಾವುಕರಾಗಿ ಮಾತನಾಡಿದರು.