‘ಚಿಕ್ಕಮಲ್ಲಿಗವಾಡದ ಬಡ ರೈತ ಕುಟುಂಬಗಳು ಅರಣ್ಯ ಖಾತೆಯ ಕೆಟನಹಟ್ಟಿ ಗ್ರಾಮದ ಜಮೀನಿನಲ್ಲಿ ಪೂರ್ವಜರ ಕಾಲದಿಂದ ಸಾಗುವಳಿ ಮಾಡಿಕೊಂಡು ಉಪಜೀವನ ನಡೆಸುತ್ತಿವೆ. ಅರಣ್ಯ ಇಲಾಖೆಯು ಆ ಜಮೀನಿನಲ್ಲಿ ಅಕೇಸಿಯಾ ಸಸಿಗಳನ್ನು ನೆಟ್ಟಿತ್ತು. ಹೀಗಿದ್ದರೂ, ರೈತರು ನಡುವೆ ಸಾಗುವಳಿ ಮಾಡುತ್ತಿದ್ದರು. ಈಗ ಸಸಿಗಳು ಬೆಳೆದು ಮರಗಳಾಗಿವೆ. ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಏಳು ದಿನಗಳ ಒಳಗಾಗಿ ಸಾಗುವಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.ಇದಕ್ಕೂ ಮುನ್ನ ಕಲಾಭವನದಿಂದ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಮೆರವಣಿಗೆ ನಡೆಸಿದರು.