</p><p>ಚುನಾವಣೆ ಸಂದರ್ಭದಲ್ಲಿ ನನ್ನ ತೇಜೋವಧೆ ಮಾಡಲು, ಟಿಕೆಟ್ ತಪ್ಪಿಸಲು ವಿರೋಧಿಗಳು ಷಡ್ಯಂತ್ರ ರೂಪಿಸಿ ನಕಲಿ ಆಡಿಯೊ ಹರಿಯಬಿಟ್ಟಿದ್ದಾರೆ. ಕ್ಷೇತ್ರದಲ್ಲಿ ಈ ಭಾರಿ ಅಭಿವೃದ್ಧಿ ಹೊಳೆ ಹರಿಸಿರುವೆ. ಅದನ್ನು ಕಂಡು ಸಹಿಸದವರು ರಾಜಕೀಯವಾಗಿ ಎದುರಿಸಲಾಗದೇ ಈ ಕೆಲಸ ಮಾಡಿದ್ದಾರೆ.</p><p>ಸದ್ಯ ಜಮಖಂಡಿ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಇರುವೆ. ಅಲ್ಲಿಂದ ಬಾಗಲಕೋಟೆಗೆ ಹೊರಟಿರುವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ದೂರು ದಾಖಲಿಸುವೆ. ಆಡಿಯೊದ ಸತ್ಯಾಸತ್ಯತೆ ಪರಿಶೀಲಿಸಿ ಷಡ್ಯಂತ್ರ ರೂಪಿಸಿರುವವರ ಪತ್ತೆ ಮಾಡಿ ಕ್ರಮಕ್ಕೆ ಒತ್ತಾಯಿಸುವೆ ಎಂದರು.</p></p>