ಪ್ರಶಸ್ತಿ ಪ್ರದಾನ ಮಾಡಿದ ಸುಪ್ರೀಂಕೋರ್ಟ್ನ ನಿವೃತ್ತ ಮುಖ್ಯನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ‘ದೇಶದ ಅತ್ಯಂತ ದೊಡ್ಡ ಆಸ್ತಿ ಕಲೆ, ಸಾಹಿತ್ಯ ಹಾಗೂ ಸಂಗೀತ. ಇದಕ್ಕೆ ಸಾಕ್ಷಿ ಇಲ್ಲಿ ಸೇರಿರುವ ಕಲಾವಿದರು ಹಾಗೂ ಕಲಾಸಕ್ತರು. ದೈನಂದಿನ ಒತ್ತಡ, ಹಣಕಾಸಿನ ಸಮಸ್ಯೆ, ಅನಾರೋಗ್ಯ... ಹೀಗೆ ಎಲ್ಲ ತೊಂದರೆಗಳನ್ನು ಮರೆತು ಇಲ್ಲಿ ಸೇರಿದ್ದಾರೆ. ಬೆಂಗಳೂರು ಸಹೃದಯರ ನಗರ ಎಂಬುದನ್ನು ಇದು ಸಾಕ್ಷೀಕರಿಸುತ್ತದೆ’ ಎಂದರು.