2015ರಲ್ಲಿ ಮಾದೇಸಿಗಳ ಸಂಘರ್ಷದ ನಂತರ ಭಾರತ ಮತ್ತು ನೇಪಾಳದ ನಡುವಣ ಸಂಬಂಧಕ್ಕೆ ಧಕ್ಕೆಯಾಗಿತ್ತು. ಭಾರತದಿಂದ ನೇಪಾಳಕ್ಕೆ ಅತ್ಯಗತ್ಯ ಸರಕುಗಳ ಸರಬರಾಜು ಕಡಿಮೆಯಾಗಿತ್ತು. ಚೀನಾವು ತನ್ನ ಮಹತ್ವಾಕಾಂಕ್ಷೆಯ ‘ಒಂದು ವಲಯ–ಒಂದು ರಸ್ತೆ’ ಯೋಜನೆಯಲ್ಲಿ ನೇಪಾಳವನ್ನೂ ಸೇರಿಸಿಕೊಂಡು ಅದಕ್ಕೆ ಹತ್ತಿರವಾಗಲು ಪ್ರಯತ್ನಿಸಿತ್ತು. ಆದರೆ ಈ ಹೊಸ ಒಪ್ಪಂದಗಳಿಂದ ನೇಪಾಳದೊಂದಿಗೆ ಭಾರತದ ಸಂಬಂಧ ಸುಧಾರಿಸಲಿದೆ ಎಂದು ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.