ಭಾನುವಾರ ಸಂಜೆ ಮಳೆಯಿಂದಾಗಿ ಮಣ್ಣು ಕೆಸರಾಗಿ ವಾಹನಗಳು ತೆರಳುವಾಗ ಜಾರಲು ಆರಂಭವಾಗಿತ್ತು. ಹಲವು ಬಸ್ಸುಗಳು ಅರಿವಿಲ್ಲದೆ ತೆರಳಿದ್ದರಿಂದಾಗಿ ಮಾರ್ಗಮಧ್ಯೆ ಜಾರಲು ಆರಂಭಿಸಿದ್ದರಿಂದಾಗಿ ಮುಂದೆ ಪ್ರಯಾಣಿಸಲು ಅಸಾಧ್ಯವಾಯಿತು. ದ್ವಿಚಕ್ರ ವಾಹನ ಹೂತು ಸವಾರರು ಕೆಸರಿನಲ್ಲಿ ಬಿದ್ದು ಮೈಪೂರ್ತಿ ಕೆಸರು ಮಾಡಿಕೊಂಡರು. ಸಂಚಾರ ಪೊಲೀಸರು ಸ್ಥಳಕ್ಕೆ ಬಂದು ವಾಹನ ಸವಾರರಿಗೆ ಹೋಗದಂತೆ ತಡೆದರೂ ಹಲವರು ಅದೇ ಮಾರ್ಗವಾಗಿ ತೆರಳಿದ್ದರಿಂದಾಗಿ ಇಕ್ಕಟ್ಟಿನಲ್ಲಿ ಸಿಲುಕುವಂತಾಯಿತು.