ಸಂಸ್ಕೃತ ನಾಟಕಕಾರ ಭಾಸನ ‘ಪ್ರತಿಮಾನಾಟಕಂ’ ನಲ್ಲಿ ಪ್ರತಿಮಾಗೃಹವೊಂದರ ಪ್ರಸಂಗವಿದೆ. ಆ ಗೃಹದಲ್ಲಿ ಅಯೋಧ್ಯೆಯನ್ನು ಆಳಿ ಅಳಿದ ಮಹಾರಾಜರ ಪ್ರತಿಮೆಗಳನ್ನು ಸ್ಥಾಪಿಸಿ, ಹೆಸರು ಮತ್ತು ಇತರ ವಿವರಗಳ ಫಲಕಗಳನ್ನು ನೇತುಹಾಕಿರುತ್ತಾರೆ. ಅವು ಹಾಳಾಗದೆ ಗೌರವಕ್ಕೆ ಸದಾ ಪಾತ್ರವಾಗಿರುತ್ತವೆ. ಈ ರೀತಿಯಲ್ಲೇ ಈ ದೇಶದ ಪ್ರತಿ ರಾಜ್ಯವೂ ತನ್ನ ಅಧೀನದ ಕೃಷಿರಹಿತ ಭೂಪ್ರದೇಶದಲ್ಲಿ ಒಳಾಂಗಣ ಕ್ರೀಡಾಂಗಣದ ಮಾದರಿಯಲ್ಲಿ ‘ಪ್ರತಿಮಾಗೃಹ’ಗಳನ್ನು ನಿರ್ಮಿಸಿ, ಎಲ್ಲ ಪ್ರತಿಮೆಗಳನ್ನು ಅಲ್ಲಿಗೆ ಸ್ಥಳಾಂತರಿಸಬೇಕು.