ಏ.14ರ ಬೆಳಿಗ್ಗೆ 11ಕ್ಕೆ ‘ನನ್ನ ದೇಶ, ನನ್ನ ಬದುಕು’ ವಿಷಯದ ಕುರಿತು ಸಾಂಸ್ಕೃತಿಕ ಸಂವಾದವಿದ್ದು, ಪ್ರೊ.ಬಾಬು ಮ್ಯಾಥ್ಯು, ಶ್ರೀಪಾದ್ ಭಟ್, ಅಖಿಲಾ ವಾಸನ್, ವಿಜಯ್ಕುಮಾರ್ ಎಸ್. ಹಾಗೂ ಬಿ.ಯು.ಸುಮಾ ಪಾಲ್ಗೊಳ್ಳಲಿದ್ದಾರೆ. ಸಂಜೆ 5.30ಕ್ಕೆ ಪ್ರಶಸ್ತಿ ಪ್ರದಾನ ನಡೆಯಲಿದೆ. ನಾಗಮೋಹನದಾಸ್, ವಿಮರ್ಶಕ ಪ್ರೊ.ರಹಮತ್ ತರೀಕೆರೆ, ಬಿ.ಟಿ.ಲಲಿತಾ ನಾಯಕ್ ಭಾಗವಹಿಸಲಿದ್ದು, ಸ್ಫೂರ್ತಿಧಾಮದ ಎಸ್.ಮರಿಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.