ಕೃಷಿ, ತೋಟಗಾರಿಕೆ, ಮೀನುಗಾರಿಕೆ ಈ ಕ್ಷೇತ್ರದ ಜನರ ಪ್ರಮುಖ ಕಸುಬಾಗಿದೆ. ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ನಾಡದೋಣಿ ಮೀನುಗಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮತ್ಸ್ಯ ಕ್ಷಾಮ ಹಾಗೂ ಸೀಮೆಎಣ್ಣೆ ಸಮಸ್ಯೆಯನ್ನು ಇಲ್ಲಿನ ಮೀನುಗಾರರು ಎದುರಿಸು
ತ್ತಿದ್ದಾರೆ. ಅದಕ್ಕಾಗಿ ಹಲವಾರು ಬಾರಿ ಹೋರಾಟ ಮಾಡಿದರೂ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ. ಕಾಡುಪ್ರಾಣಿಗಳ ಹಾವಳಿ ಕೃಷಿಗೆ ಎರವಾಗಿದೆ.