ಚಿತ್ರನಟರು, ರಾಜಕೀಯ ಜನಪ್ರತಿನಿಧಿಗಳು ಕೇವಲ ಹೇಳಿಕೆ ನೀಡುವುದರಿಂದ ಈ ಸಮಸ್ಯೆ ಪರಿಹಾರ ಆಗಲಾರದು. ನೀರು ಹಂಚಿಕೆಯಲ್ಲಿ ಏನು ತೊಂದರೆಯಾಗುತ್ತಿದೆ? ನದಿ ನೀರಿನ ಪ್ರಮಾಣ ಕಡಿಮೆಯಾಗಲು ಏನು ಕಾರಣ? ಇಂದಿನ ಕಾವೇರಿ ಸ್ಥಿತಿ ಹೇಗಿದೆ ಎನ್ನುವುದನ್ನು ಯಾವ ರಾಜಕಾರಣಿಗಳೂ ಹೇಳುವುದಿಲ್ಲ ಎಂದ ಅವರು, ಇದರ ಬಗ್ಗೆ ಜನರಿಗೆ ವಾಸ್ತವಾಂಶ ತಿಳಿಸಲು ಪರಿಸರವಾದಿ ಕೃಪಾಕರ ಸೇನಾನಿ ಅವರ ಜೊತೆಗೂಡಿ ಸಾಕ್ಷ್ಯಚಿತ್ರ ನಿರ್ಮಿಸುತ್ತಿರುವುದಾಗಿ ತಿಳಿಸಿದರು.