ಠಾಣೆಯ ಅಧಿಕಾರಿ ರೌಡಿಗಳ ಬಗ್ಗೆ ಮಾಹಿತಿ ನೀಡಲು ತಡವರಿಸುತ್ತಿದ್ದಂತೆ, ಯಾರಾದರೂ ಒಬ್ಬ ಪೇದೆಯನ್ನು ಕರೆಯುವಂತೆ ಐಜಿಪಿ ತಿಳಿಸಿದರು. ಆಗ ಪೇದೆ ದಳವಾಯಿ ಎಲ್ಲ ರೌಡಿಗಳ ವಿವರವನ್ನು ಪಟಾಪಟ್ ತಿಳಿಸಿದ್ದು ಅವರ ಮೆಚ್ಚುಗೆಗೆ ಕಾರಣವಾಯಿತು. ರೌಡಿಗಳ ವಿಚಾರಣೆ ಮುಗಿದ ನಂತರ ಎಲ್ಲ ಪೋಲಿಸ್ ಅಧಿಕಾರಿಗಳ ಎದುರೇ ಅಲೋಕ್ ಕುಮಾರ ಜೇಬಿನಲ್ಲಿದ್ದ ಹಣ ತೆಗೆದು ಪೇದೆಗೆ ನೀಡಿ ಠಾಣೆಯ ಬಗ್ಗೆ ನಿನ್ನಲ್ಲಿ ವಿಷಯ ಜ್ಞಾನವಿದೆ ಎಂದು ಕೈ ಕುಲಕಿ ಮೆಚ್ಚುಗೆ ವ್ಯಕ್ತಪಡಿಸಿದರು.