ನಾಯಿಗಳ ಕೂಗಾಟ ಕೇಳಿದ ಮೂಡ್ಲಿಯ ರಾಮಣ್ಣ ಅವರ ಮನೆಯವರು ಹಾಗೂ ಗ್ರಾಮಸ್ಥರು ನಾಯಿಗಳಿಂದ ಜಿಂಕೆಯನ್ನು ರಕ್ಷಿಸಿದರು. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಸೀತೂರು ವಲಯ ಅರಣ್ಯ ರಕ್ಷಕ ವಾಸುದೇವ, ಅರಣ್ಯ ವೀಕ್ಷಕ ರೂಪ್ಲನಾಯಕ್ ಗಾಯಗೊಂಡಿದ್ದ ಜಿಂಕೆಗೆ ಚಿಕಿತ್ಸೆ ಕೂಡಿಸಲು ಪಶು ಆಸ್ಪತ್ರೆಗೆ ಕೊಂಡೊಯ್ದರು. ಆದರೆ, ಮಾರ್ಗ ಮಧ್ಯದಲ್ಲೇ ಜಿಂಕೆ ಮೃತಪಟ್ಟಿತು.