12–4–2018ರ ಸಂಚಿಕೆಯ 4ನೇ ಪುಟದಲ್ಲಿ ಪ್ರಕಟವಾದ ‘ಎರಡು ದೋಣಿ ಪಯಣಿಗರು?’ ಸುದ್ದಿಯಲ್ಲಿ, 1985ರಲ್ಲಿ ದೇವೇಗೌಡ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು ಎಂದಾಗಿದೆ. ಅದು ಸಾತನೂರು ಕ್ಷೇತ್ರ ಎಂದಾಗಬೇಕು. 2004ರ ವಿಧಾನಸಭಾ ಚುನಾವಣೆಯಲ್ಲಿ ಎಸ್. ಬಂಗಾರಪ್ಪ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿರಲಿಲ್ಲ. ಅಂದು ಸೊರಬದಲ್ಲಿ ಕುಮಾರ ಬಂಗಾರಪ್ಪ ಗೆಲುವು ಕಂಡಿದ್ದರು. 1999ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಮತ್ತು ರಾಯಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸೋನಿಯಾ ಗಾಂಧಿ, ಆಗ ಎಐಸಿಸಿ ಅಧ್ಯಕ್ಷೆ ಆಗಿದ್ದರು.