ಬೆಂಗಳೂರಿಗರಿಗೆ ಈ ವಿಷ್ಯ ಎಲೆಕ್ಷನ್ ದಿನ ನೆನಪಿರುತ್ತಾ ಅಥ್ವಾ ಮತ್ತೆ ನೆನಪು ಮಾಡ್ಬೇಕಾ?
#ಮತದಾನದ ದಿನ ಮೈಮರೆಯದಿರಿ #ನಿಮ್ಮ ಪ್ರಾರಬ್ಧಕ್ಕೆ ನೀವೇ ಹೊಣೆ
–ರೋಹಿತ್ ಚಕ್ರತೀರ್ಥ @RohitMath
ನಾನೊಬ್ಬ ಸಾಮಾನ್ಯ ರೈತನ ಮಗ. ನನಗೆ ಯಾವುದೇ ರಾಮಮಂದಿರ ಬೇಡ, ಮಸೀದಿ ಚರ್ಚ್ಗಳು ಬೇಡ. 30 ಕೆ.ಜಿ ಅಕ್ಕಿ ಕೂಡ ಬೇಡ. ನನಗೆ ಬೇಕಾಗಿರೋದು ರೈತರ ಬಾಳನ್ನು ಸಾಕಾರ ಮಾಡುವಂತ ದಿಟ್ಟ ನಾಯಕ. ಯುವ ಪೀಳಿಗೆಯನ್ನು ವ್ಯವಸಾಯದ ಕಡೆ ಸೆಳೆಯುವಂತ ನಾಯಕ. ನಮ್ಮದಲ್ಲದ ತಪ್ಪಿನಿಂದ ಮಾಡಿದ ಸಾಲದ ಹೊರೆಯನ್ನು ಇಳಿಸುವಂತ ನಾಯಕ.
–ದೀಪಕ್ ಗೌಡ @deepakgowda
ಅಂಬಿ ಚಿಕಿತ್ಸಾ ವೆಚ್ಚ ಸರ್ಕಾರದಿಂದ ಪಾವತಿ:
ಸುದ್ದಿ ನಮ್ ಬಳ್ಳಾರಿಯಾಕಿ, ಬುರ್ರಕತಿ ಹೇಳತಿದ್ದ ದರೋಜಿ ಈರಮ್ಮ ದವಾಖಾನಿಗ ಸೇರಿದಾಗ ಸಿದ್ದರಾಮಯ್ಯನ ಸರ್ಕಾರ ಏನ ನೆರವೂ ಸೈತ್ ಕೊಡಲಿಲ್ಲ. ಹಂಗs ಸಾಲ ಮರದ ತಿಮ್ಮಕ್ಕಗೂ ಮಾಡಿದರ. ಇಂವಾ, ಶಿಗರೇಟ ಸೇದಿ ಹೆಂಡ ಕುಡದ ಕೆಟ್ಟಂವ... ಇಂವಗ ಸರ್ಕಾರನs ಎಲ್ಲ ಮಾಡತೈತಿ.
–ಖಡಕ್ ಕಮಲಜ್ಜಿ @KamalammaKhadak
ರಾಜಕೀಯ ಪಕ್ಷಗಳೇ, ಉಪವಾಸ ಅನ್ನುವ ಪದ ಗಾಂಧೀಜಿ ಜೊತೆಯಲ್ಲೇ ಹೊರಟೋಗಿದೆ. ಅಲ್ಪಸ್ವಲ್ಪ ಇರುವುದನ್ನೂ ಏಕೆ ಕಲುಷಿತಗೊಳಿಸುತ್ತೀದ್ದೀರ?