ಮಲೆನಾಡಿನಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು, ಅರಣ್ಯದಲ್ಲಿ ಆಹಾರ ಹಾಗೂ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಕಾಡಾನೆಗಳು ನಾಡಿನತ್ತ ಮುಖಮಾಡುತ್ತಿವೆ. ಇದರ ಪರಿಣಾಮ ರೈತರ ಭತ್ತ, ಕಾಫಿ, ಬಾಳೆ, ಏಲಕ್ಕಿ, ಅಡಿಕೆ, ಶುಂಠಿ, ಬೆಳೆಗಳು ನಾಶವಾಗುತ್ತಿವೆ. ಕೆಲವೆಡೆ ಕಾಡಾನೆ ದಾಳಿಗೆ ಹಲವರು ಪ್ರಾಣ ಕಳೆದುಕೊಂಡಿದ್ದರೆ. ಹೆತ್ತೂರು- ಯಸಳೂರು ಹೋಬಳಿಯ ಕಾಗಿನಹರೆೆ, ಬಾಳೆಹಳ್ಳ, ಸಿಂಕೆರಿ, ಬಿಸ್ಲೆ, ಪಟ್ಲ, ಚಿನ್ನಹಳ್ಳಿ, ಶಿವನಹಳ್ಳಿ ಕೂಡಿಗೆ, ಕೂತ್ತಳ್ಳಿ, ಕೆರೂಡಿ, ಅತ್ತಿಗನಹಳ್ಳಿ, ಐಗೂರು ಭಾಗದಲ್ಲಿ ಕಾಡನೆಗಳ ಹಾವಳಿ ತೀರಾ ಮಿತಿ ಮೀರಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಗ್ರಾಮಗಳ ಗ್ರಾಮಸ್ಥರು ಆಗ್ರಹಿಸಿದ್ದಾರೆ.