ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರು ಅಥ್ಲೀಟ್‌ಗಳನ್ನು ವಾಪಸ್ ಕಳುಹಿಸಿದ ಆಯೋಜಕರು

Last Updated 13 ಏಪ್ರಿಲ್ 2018, 19:46 IST
ಅಕ್ಷರ ಗಾತ್ರ

ಗೋಲ್ಡ್ ಕೋಸ್ಟ್‌: ಕಾಮನ್‌ವೆಲ್ತ್ ಕೂಟದ ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣದಿಂದ ಭಾರತದ ವೇಗದ ನಡಿಗೆ ಅಥ್ಲೀಟ್‌ ಕೆ.ಟಿ.ಇರ್ಫಾನ್ ಮತ್ತು ಟ್ರಿಪಲ್ ಜಂಪ್‌ ಕ್ರೀಡಾಪಟು ವಿ.ರಾಕೇಶ್‌ ಬಾಬು ಅವರನ್ನು ವಾಪಸ್ ಕಳುಹಿಸಲಾಗಿದೆ.

ಉದ್ದೀಪನ ಮದ್ದು ಸೇವನೆ ಪ್ರಕರಣಗಳಿಂದ ದೂರ ಉಳಿಯುವುದಕ್ಕಾಗಿ ಕೂಟದ ಆಯೋಜಕರು ‘ಸಿರಿಂಜ್ ಬಳಕೆ ನಿಷೇಧ’ ನಿಯಮವನ್ನು ಜಾರಿಗೊಳಿಸಿದ್ದರು.

(ರಾಕೇಶ್ ಬಾಬು)

ಭಾರತದ ಈ ಇಬ್ಬರು ಇದನ್ನು ಪಾಲಿಸಿಲ್ಲ ಎಂದು ದೂರಿ ವಾಪಸ್ ಕಳುಹಿಸಲಾಗಿತ್ತು. ಇದರ ವಿರುದ್ಧ ಸಲ್ಲಿಸಿದ್ದ ಮನವಿಗೆ ಆಯೋಜಕರು ಸ್ಪಂದಿಸಲಿಲ್ಲ.

ಮಾತ್ರವಲ್ಲದೆ ತಂಡದ ಅಧಿಕಾರಿಗಳಾದ ವಿಕ್ರಂ ಸಿಂಗ್ ಸಿಸೋಡಿಯಾ, ನಾಮದೇವ ಶಿರ್ಗಾಂವ್ಕರ್ ಮತ್ತು ರವೀಂದ್ರ ಚೌಧರಿ ಅವರಿಗೆ ಎಚ್ಚರಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT