ಭಾರತಕ್ಕೆ ಎಂಟನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತ್ತು. ಇದನ್ನು ಗೋಲಾಗಿ ಪರಿವರ್ತಿಸುವ ಪ್ರಯತ್ನದಲ್ಲಿ ಭಾರತ ಆಘಾತಕ್ಕೆ ಒಳಗಾಯಿತು. ಗುರುಜೀತ್ ಕೌರ್ ಹೊಡೆದ ಚೆಂಡು ಎದುರಾಳಿ ತಂಡದ ಆಟಗಾರ್ತಿಯ ಸ್ಟಿಕ್ಗೆ ಬಡಿದು ವಾಪಸ್ ಬಂದು ವಂದನಾ ಕಟಾರಿಯಾ ಅವರ ಹಣೆಗೆ ತಾಗಿತು. ಹೀಗಾಗಿ ಅವರು ಅಂಗಣ ಬಿಟ್ಟು ಹೊರನಡೆಯಬೇಕಾಯಿತು.