ಅಶ್ವಿನಿ ಮತ್ತು ಭರಣಿ, ಕೃತ್ತಿಕಾ ಮಳೆ ಹದವಾದ ಹಸಿಯಾಗುವಂತೆ ಸುರಿದರೆ ಭೂಮಿ ಉಳುಮೆಗೆ ನೆರವಾಗುತ್ತದೆ. ರೈತರು ಭೂಮಿ ಸಿದ್ಧಪಡಿಸಿಕೊಂಡು ಬಿತ್ತನೆಗೆ ತಯಾರಿ ನಡೆಸುತ್ತಾರೆ. ರೋಹಿಣಿ ಮಳೆ ಬಿದ್ದಾಗ ಊಟದ ಜೋಳ ಬಿತ್ತನೆ ಮಾಡುತ್ತಾರೆ. ಏ.26ರವರೆಗೆ ಅಶ್ವಿನಿ ಮಳೆ ಇರಲಿದೆ. ಏ27ರಿಂದ ಭರಣಿ, ಆರಂಭವಾಗಲಿದೆ. ರೈತರ ಪಾಲಿಗೆ ಈ ನಾಲ್ಕು ಮಳೆಗಳು ಅತ್ಯಂತ ಮಹತ್ವದ್ದು ಹಾಗೂ ಫಸಲಿನ ನಿರೀಕ್ಷೆಯನ್ನೂ ಮೂಡಿಸುತ್ತವೆ.