ರಾಜ್ಯದಲ್ಲಿ ಮತ್ತೆ ಚುನಾವಣೆ ಬಂದಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುವನ್ನು ಆಯ್ಕೆ ಮಾಡುತ್ತಾರೆ. ಆದರೆ ಮತದಾನ ಮಾಡುವ ಪ್ರಜೆ ಜಾಗೃತನಾಗಿ ವಿವೇಕದಿಂದ ತನ್ನ ಹಕ್ಕನ್ನು ಚಲಾಯಿಸಿದಾಗ ಮಾತ್ರ ಪ್ರಜೆಯೇ ಪ್ರಭುವಾಗುತ್ತಾನೆ. ಆ ಶಕ್ತಿಗಾಗಿಯೇ ಚುನಾವಣೆಗೆ ಅಭ್ಯರ್ಥಿಗಳು ಮತದಾರರನ್ನು ಓಲೈಸುತ್ತಾರೆ ಮತ್ತು ತಮ್ಮ ಪಕ್ಷದ ಪ್ರಣಾಳಿಕೆಗಳ ಮೂಲಕ ಮತ ಯಾಚಿಸುತ್ತಾರೆ. ಈ ಶಕ್ತಿಯನ್ನು ಜ್ಞಾಪಿಸಿಕೊಂಡು ಪ್ರತಿಯೊಬ್ಬ ಮತದಾರನೂ ತನ್ನ ಹಕ್ಕನ್ನು ಚಲಾಯಿಸಬೇಕು.