ಬೆಂಗಳೂರು ವಿ.ವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕಿ ಡಾ.ಕೆ.ಎಸ್.ವೈಶಾಲಿ, ‘ಶೂನ್ಯ ಸಂಪಾದನೆ, ಶಾಮರಸನ ಪ್ರಭುಲಿಂಗಲೀಲೆ, ಹರಿಹರನ ಮಹಾದೇವಿಯಕ್ಕನ ರಗಳೆಯಲ್ಲಿ ವಚನಕಾರರ ಬಗ್ಗೆ ವೈಭವೀಕರಿಸಿರುವುದು ಕಾಣುತ್ತೇವೆ. ಅಕ್ಕನ ಬಗ್ಗೆ ವಾಸ್ತವಿಕ ದೃಷ್ಟಿಕೋನ ನೀಡುವ ಕೃತಿಗಳು ಅಲಭ್ಯ. 60 ಶಿವಶರಣೆಯರು ಇದ್ದರೂ ಅಕ್ಕ ನಮಗೆ ಮುಖ್ಯವಾಗುತ್ತಾಳೆ, ಕಾಡುತ್ತಾಳೆ. ಆಕೆಯ ಬಗ್ಗೆ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ವಾರಸ್ಯಕರ ಒಳನೋಟಗಳನ್ನು ಈ ಕೃತಿಯಲ್ಲಿ ಕಟ್ಟಿಕೊಡಲಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.