ರಾಜ್ಯದಲ್ಲಿ ಒಂದು ಕಡೆ ವಿಧಾನ ಸಭೆಯ ಚುನಾವಣೆಯ ಕಾವು ಏರುತ್ತಿದ್ದರೆ ಮತ್ತೊಂದೆಡೆಗೆ ನೀರಿನ ತೀವ್ರ ಅಭಾವ ಚುನಾವಣೆಯ ಸಂದರ್ಭದಲ್ಲಿ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಈಗ ಮತ್ತೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದತ್ತ ರಾಜ್ಯದ ಜನತೆ ಮುಖ ಮಾಡುವಂತಾಗಿದೆ. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರನ್ನು ಬಿಡುಗಡೆ ಮಾಡುವ ಪ್ರಕ್ರಿಯೆ ಆರಂಭವಾಗಬೇಕಿದೆ. ಆದರೆ ಸದ್ಯ ಜನಪ್ರತಿನಿಧಿಗಳು ತಮ್ಮ ಟಿಕೆಟ್ಗಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ, ಇದು ಎಂದು ಆರಂಭವಾಗುತ್ತದೆ ಮತ್ತು ಈ ಭಾಗದ ಜನ ಮತ್ತು ಜಾನುವಾರಗಳ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಬಹಳಷ್ಟು ಗಂಭೀರವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.