ಸುಮಾರು 15 ವರ್ಷಗಳಿಂದ ಇಲ್ಲಿ ಜನ ವಾಸಿಸುತ್ತಿದ್ದರೂ, ಈ ವರೆಗೂ ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ. ಮಳೆಗಾಲ ಬಂದರೆ ಇಲ್ಲಿನ ನಿವಾಸಿಗಳಿಗೆ ಎಲ್ಲಿಲ್ಲದ ಸಂಕಷ್ಟಗಳು ಎದುರಾಗುತ್ತವೆ. ಮಳೆ ನೀರು ಮಾತ್ರವಲ್ಲ, ಚರಂಡಿಯ ಕೊಳಚೆಯ ಜೊತೆಗೆ ಹಾವು, ಚೇಳು, ಝರಿಗಳಂತಹ ವಿಷಕಾರಿ ಜಂತುಗಳು ಕೂಡಾ ಮನೆಗೆ ನುಗ್ಗುತ್ತವೆ ಎಂದು ಸ್ಥಳೀಯ ನಿವಾಸಿ ಲಿಂಗರಾಜನಗೌಡ ಪಾಟೀಲ ತಿಳಿಸಿದರು.