‘ರಾಜೇಶ್ವರಿಯನ್ನು 10 ವರ್ಷಗಳ ಹಿಂದೆ ಟ್ರಕ್ವೊಂದರಿಂದ ಇಳಿಸುವಾಗ ಅದರ ಒಂದು ಕಾಲು ಮುರಿದಿದೆ. ಆಗಿನಿಂದಲೂ ಅದು ಮೂರು ಕಾಲುಗಳ ಮೇಲೆ ಮಾತ್ರ ನಿಲ್ಲುತ್ತಿದ್ದು ಸಂಧಿವಾತದಿಂದ ಬಳಲುತ್ತಿದೆ. ಇದನ್ನು ಗುಣಪಡಿಸಲು ಸಾಧ್ಯವಿಲ್ಲ. ಅಲ್ಲದೆ, 45 ವರ್ಷದ ಈ ಆನೆ, ಕೆಲ ತಿಂಗಳುಗಳಿಂದ ಮಲಗಿಯೇ ಇರುವುದರಿಂದ ಅದಕ್ಕೆ ಹುಣ್ಣುಗಳು (ಬೆಡ್ ಸೋರ್) ಆಗಿವೆ. ಇದರಿಂದ ಆನೆಗೆ ನೋವು ಸಹಿಸಲು ಆಗುವುದಿಲ್ಲ’ ಎಂದು ಮುರಳೀಧರನ್ ಅರ್ಜಿಯಲ್ಲಿ ತಿಳಿಸಿದ್ದರು.