ಶಿಬಿರದಲ್ಲಿ ಮಕ್ಕಳಿಂದ ಯೋಗ, ನೃತ್ಯ, ಸಮೂಹ ಗಾಯನಗಳ ಪ್ರದರ್ಶನ ನಡೆದವು. ಹೆಣ್ಣು ಭ್ರೂಣ ಹತ್ಯೆ ವಿರೋಧಿಸಿ ‘ಹೆಣ್ಣು ಮಕ್ಕಳನ್ನು ರಕ್ಷಿಸಿ’ ಎಂಬ ಕಿರು ನಾಟಕದ ಪ್ರದರ್ಶನ ನಡೆಯಿತು. ಸರ್ಕಾರಿ ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಸುಮಂಗಲಾ ನಾಯಕ ಸ್ವಾಗತಿಸಿದರು. ಆಪ್ತಸಮಾಲೋಚಕಿ ಮೋಹಿನಿ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ರಾಜೇಶ್ವರಿ ಕೆ.ಬಿ., ಸದಸ್ಯರಾದ ಜ್ಯೋತಿ ಮಿರಾಶಿ, ಮಾರುತಿ ನಿಲೇಕಣಿ, ತರಬೇತುದಾರರಾದ ಯಮುನಾ ಶೇಟ್, ಗೀತಾ ಸಾಳಸ್ಕರ್, ವಿದ್ಯಾ ಭಟ್, ಪ್ರವೀಣಾ ದೊಡ್ಮನಿ, ಜಿ.ಕೆ. ಮಹಾಲೆ, ಅನೀಲ ಮಡಿವಾಳ, ಶುಭಾಂಗಿ ಶಿರೋಡ್ಕರ್ ಹಾಜರಿದ್ದರು.