ಸಿಚಿವ ಸ್ಥಾನದಲ್ಲಿರುವ ದಿನೇಶ್ ಗುಂಡೂರಾವ್, ಅನಕ್ಷರಸ್ಥರಂತೆ ಮಾತನಾಡಿದ್ದಾರೆ. ಕೀಳುಮಟ್ಟದ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ನಾಥ ಸಂಪ್ರದಾಯವನ್ನು ಪೂಜಿಸುವ ಬಹುಸಂಖ್ಯಾತ ಒಕ್ಕಲಿಗರು ಇರುವ ಮಂಡ್ಯ ಜಿಲ್ಲೆ ಜನತೆಗೆ ಅವರ ಮಾತಿನಿಂದ ನೋವುಂಟಾಗಿದೆ. ಸಚಿವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗಣ್ಣಗೌಡ, ಮುಖಂಡರಾದ ಸುಜಾತಾ ಸಿದ್ದಯ್ಯ, ಅರವಿಂದ್, ನರಸಿಂಹಮೂರ್ತಿ, ಸತೀಶ್, ಕೆಂಪಬೋರಯ್ಯ, ಶಿವಕುಮಾರ್ ಆರಾಧ್ಯ, ಮಂಜುನಾಥ್ ಇದ್ದರು.