ಸಿನಿಮಾ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ರಂಗನಾಥ ಅವರು ತಮ್ಮ ಇಡೀ ತಂಡದ ಜೊತೆಯಾಗಿ ಪತ್ರಿಕಾಗೋಷ್ಠಿ ಕರೆದಿದ್ದರು. ‘ಸಿನಿಮಾ ಕಥೆಯನ್ನು ಕೇಳಿದ ಐದು ಜನ ನಟರು ಇದನ್ನು ಸಿನಿಮಾ ಮಾಡಲು ಆಗದು ಎಂದು ಹೇಳಿದ್ದರು. ಆದರೆ ಕೊನೆಯಲ್ಲಿ, ನಟ ಚೇತನ್ ಚಂದ್ರ ಅಭಿನಯಿಸಲು ಒಪ್ಪಿದರು. ಅರವತ್ತೈದು ದಿನಗಳ ಚಿತ್ರೀಕರಣ ನಡೆದಿದ್ದು, ಇನ್ನೂ ಮೂವತ್ತು ದಿನಗಳ ಚಿತ್ರೀಕರಣ ಬಾಕಿ ಇದೆ’ ಎಂದರು ರಂಗನಾಥ. ಈ ಸಿನಿಮಾದಲ್ಲಿ ಹಿರಿಯ–ಕಿರಿಯ ಕಲಾವಿದರ ದೊಡ್ಡ ದಂಡು ಇದೆ ಎಂಬುದು ಅವರ ಅಂಬೋಣ.