ಬಸವಣ್ಣನವರು ಮುಖ್ಯವಾಗಿ ತಮ್ಮ ನಡೆ-ನುಡಿಯಿಂದ ಮನುಷ್ಯರಾಗಿ ಬಹಳ ಆಪ್ತವಾಗುತ್ತಾರೆ. ವರ್ಗ-ವರ್ಣ ಭೇದಗಳನ್ನು ದಾಟಿ ಸಮಾನತೆಯ ಮಾರ್ಗದಲ್ಲಿ ನಡೆದವರು ಮತ್ತು ವಿರುದ್ಧ ನೆಲೆಯಲ್ಲಿದ್ದವರಿಗೂ ಸರಿಯಾದ ಮಾರ್ಗದ ಮನವರಿಕೆ ಮಾಡಿಸಿ ತಮ್ಮ ದಾರಿಯನ್ನು ಒಪ್ಪಿ ನಡೆಯುವಂತೆ ಮಾಡಿದವರು. ಆಡು ಭಾಷೆಗೆ ಸಾಹಿತ್ಯವನ್ನು ಒಗ್ಗಿಸಿ ವಚನಗಳನ್ನು ಕಟ್ಟುವುದರ ಮೂಲಕ ಅನಿಷ್ಟ ಪದ್ಧತಿಗಳನ್ನು ಕೆಡವಲು ಪ್ರಯತ್ನಿಸಿ ಬಹಳ ಬದುಕುಗಳನ್ನು ಕಟ್ಟಿದವರು.