ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಎಂ.ಮದನಗೋಪಾಲ್ ಮಾತನಾಡಿ, ‘ಅಳಿವಿನ ಅಂಚಿನಲ್ಲಿರುವ ಅರಣ್ಯ, ಬಯಲು ಪ್ರದೇಶಗಳಲ್ಲಿ ಗಿಡ ಮರ ಬೆಳೆಸಲು, ಸಂರಕ್ಷಣೆ ಮಾಡುವ ಹೊಣೆಗಾರಿಕೆಯನ್ನು ಗ್ರಾಮ ಸಭೆ ಸುಪರ್ದಿಗೆ ನೀಡಬೇಕು. 2006 ಅರಣ್ಯ ಕಾಯ್ದೆಗೂ ನೂತನ ಕರಡಿನಲ್ಲಿ ಮಹತ್ವ ನೀಡಬೇಕು,
ಖಾಸಗಿಯವರಿಗೆ ಅಧಿಕಾರ ನೀಡದೆ ಅರಣ್ಯ ಇಲಾಖೆಯೇ ಹೊಣೆಗಾರಿಕೆ ಹೊಂದಬೇಕು. ಸ್ಥಳೀಯ ಅರಣ್ಯ ನಿವಾಸಿಗಳಿಗೇ ಗಿಡ ಬೆಳೆಸುವ, ಸಂರಕ್ಷಣೆ ಮಾಡುವ, ಉದ್ಯೋಗ ಕಲ್ಪಿಸುವ ಬಗ್ಗೆ ಮಹತ್ವ ನೀಡಬೇಕು. ಕಾಡಿನಲ್ಲಿರುವ ಮಾನವ ಸಂಪನ್ಮೂಲ, ಪ್ರಾಣಿ, ಜೀವವೈವಿಧ್ಯಗಳನ್ನು ಕಾಡಿನಲ್ಲೇ ಉಳಿಸಿಕೊಳ್ಳುವ ನೀತಿಯ ಪಾಲನೆ ಆಗಬೇಕು’ ಎಂದರು.