ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈರಸಿ ವಿರುದ್ಧದ ಚಳವಳಿಗೆ ವಿದ್ಯಾ ಬಾಲನ್‌ ಬೆಂಬಲ

Last Updated 18 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮುಂಬೈ: ಸಿನಿಮಾ ಪೈರಸಿ ನಿಲ್ಲಿಸಲು ನಡೆಯುತ್ತಿರುವ ಚಳವಳಿಗೆ ನಟಿ ವಿದ್ಯಾ ಬಾಲನ್ ಬೆಂಬಲ ಸೂಚಿಸಿದ್ದಾರೆ.

ಪೈರಸಿ ವಿರುದ್ಧದ ಚಳವಳಿಯ ಭಾಗವಾಗಿ ಕಳೆದ ತಿಂಗಳು ದೆಹಲಿಯಲ್ಲಿ ನಡೆದ ‘ನಕಲು ಮಾಡುವುದು ಮತ್ತು ಕಾನೂನು ಜಾರಿಗೊಳಿಸುವ ಏಜೆನ್ಸಿಗಳ ಪಾತ್ರ’ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಅವರು, ಆ ಕುರಿತ ವಿಡಿಯೊ ಲಿಂಕ್‌ ಅನ್ನು ಮರು ಟ್ವೀಟ್‌ ಮಾಡಿದ್ದಾರೆ.

ಕೇಂದ್ರ ಸಚಿವ ಸುರೇಶ್ ಪ್ರಭು ಅವರ ಹಳೆಯ ಟ್ವೀಟ್‌ವೊಂದನ್ನು ಶೇರ್‌ ಮಾಡಿರುವ ಅವರು ‘ಚಿತ್ರರಂಗದ ಪ್ರಮುಖ ಚಳವಳಿಯ ಭಾಗವಾಗಿರುವುದು ಸಂತಸ ತಂದಿದೆ. ನಾವೆಲ್ಲ ಒಗ್ಗೂಡಿ ಪೈರಸಿ ವಿರುದ್ಧ ಹೋರಾಡಬೇಕಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

‘ಭಾರತೀಯ ನಿರ್ಮಾಪಕರ ಸಂಘದ ಸಹಯೋಗದೊಂದಿಗೆ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ವಿದ್ಯಾ ಬಾಲನ್‌ ಪೈರಸಿ ವಿರುದ್ಧ ಮಾತನಾಡಿರುವುದನ್ನು ಒಮ್ಮೆ ನೋಡಿ’ ಎಂದು ಸುರೇಶ್ ಪ್ರಭು ಟ್ವೀಟ್‌ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT