ಇದೇ 17ರಂದು ಆರ್ಸಿಬಿ ಮತ್ತು ಮುಂಬೈ ಇಂಡಿಯನ್ ತಂಡಗಳ ಮಧ್ಯೆ ಪಂದ್ಯ ನಡೆದಾಗ ಈತ ಬೆಟ್ಟಿಂಗ್ ನಡೆಸುತ್ತಿದ್ದ. ಆರ್ಸಿಬಿ ಗೆದ್ದರೆ ₹1000ಕ್ಕೆ ₹1300 ಹಾಗೂ ಮುಂಬೈ ಇಂಡಿಯನ್ ಗೆದ್ದರೆ 1000ಕ್ಕೆ 1100 ಕೊಡುವುದಾಗಿ ಪಂಟರ್ಗಳಿಗೆ ಸೂಚನೆ ರವಾನಿಸುತ್ತಿದ್ದ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ.ಪಂಟರ್ಗಳಾದ ರವಿ, ರಾಖಿ, ಭರತ್, ಮಂಜಣ್ಣ, ಪ್ರಕಾಶ್, ರಾಜೀವ್, ಕೌಡ್ಲೆ, ಗೋವಿಂದ, ಕುಮಾರ ಮತ್ತು ಶಿವರಾಜು ಬೆಟ್ಟಿಂಗ್ನಲ್ಲಿ ಭಾಗಿಯಾಗಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.